Public App Logo
Jansamasya
News
पुलिस
Bjp
National
Police
Bihar
India
कांग्रेस
बीजेपी
Gujarat
Congress
Modi
Delhi
Viral
मारपीट
Crime
Jharkhand
Dm
Up
Bollywood
Breakingnews
Narendramodi
Madhya_pradesh
उत्तरप्रदेश
Pmmodi
Rahulgandhi
यूपी
कानपुर
Uttarpradesh

ಚಿತ್ತಾಪುರ: ಸಂಕ್ರಾಂತಿ ನಿಮ್ಮಿತ್ತ ಕುಂದನೂರು ಗ್ರಾಮದ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಉಚಿತ ಕಡಲೆ ಹಿಟ್ಟು ವಿತರಣೆ

Chitapur, Kalaburagi | Jan 15, 2026
ಕಲಬುರಗಿ : ಮಕರ ಸಂಕ್ರಾಂತಿ ಹಬ್ಬದ ನಿಮ್ಮಿತ್ತ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಕುಂದನೂರು ಗ್ರಾಮದ ಶ್ರೀ ಸಂಗಮೇಶ್ವರ ದೇವಸ್ಥಾನದ ಸಂಗಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಲು ಬರ್ತಿದ್ದು, ಬಂದತಹ ಭಕ್ತರಿಗಾಗಿ ಪುಣ್ಯಸ್ನಾನ ಮಾಡಲು ಉಚಿತವಾಗಿ ಕಡಲೆ ಹಿಟ್ಟು ವಿತರಣೆ ಮಾಡಿರೋ ಅಪರೂಪದ ಪ್ರಸಂಗ ಜರುಗಿದೆ.. ಜ15 ರಂದು ಮಧ್ಯಾನ 12 ಗಂಟೆಯಿಂದಲೇ ಭಕ್ತರು ಆಗಮಿಸಿದ್ದು, ಈ ವೇಳೆ ಭಕ್ತರು ಶಾಂಪು, ಸಾಬೂನು ಬಳಸುವುದರಿಂದ ನೀರು ಕಲುಷಿತಗೊಳ್ಳೊ, ಹಿನ್ನಲೆಯಲ್ಲಿ ವರದಶ್ರೀ ಫೌಂಡೇಶನ್ ವತಿಯಿಂದ ಪುಣ್ಯಸ್ನಾನ ಮಾಡೋ ಸ್ಥಳದಲ್ಲಿ ಬಂದಂತಹ ಭಕ್ತರಿಗೆ ಉಚಿತ ಕಡಲೆ ಹಿಟ್ಟು ನೀಡಿದ್ದು, ಕಡಲೆ ಹಿಟ್ಟಿನಿಂದಲೇ ಸ್ನಾನ ಮಾಡುವುದರ ಮೂಲಕ ನೀರು ಕಲುಷಿತಗೊಳ್ಳೊದನ್ನ ತಪ್ಪಿಸಬೇಕೆಂದು ಮನವಿ ಮಾಡಿದ್ದಾರೆ.